1.

ಬಿಡುದಿನಗಳಿಂದ ಮೈಮರೆವೆಯಿಂದಕೂಡಿರುವ ಕೊಳೆಯ ಕೊಟ್ಟಚ್ಚೀವುಇವಲ್ಲಿ ಕನ್ನಡದ ಕಂಪು ಸೂಸ-ಅಲ್ಲಲ್ಲಿ ಕರಣ ಚಾಚೇವುನಡುನಾಡೆ ಇರಲಿ, ಗಡಿನಾಡೆ ಇರಲಿಕನ್ನಡದ ಕಳೆಯ ಕಚ್ಚೇವುಮರೆತೇವು ಮರವ, ತೆರೆದೇವು ಮನವ, ಎರೆದೇವು ಒಲವ ಹಿರಿ ನೆನಪನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪplease frame at least five questions in kannada for this​

Answer»

ANSWER:

ಹಚ್ಚೇವು ಕನ್ನಡದ ದೀಪ

ಕರುನಾಡದೀಪ ಸಿರಿನುಡಿಯದೀಪ

ಒಲವೆತ್ತಿ ತೋರುವಾ ದೀಪ | ಹಚ್ಚೇವು |

ಬಹುದಿನಗಳಿಂದ ಮೈಮರೆವೆಯಿಂದ

ಕೂಡಿರುವ ಕೊಳೆಯ ಕೊಚ್ಚೇವು

ಎಲ್ಲೆಲ್ಲಿ ಕನ್ನಡದ ಕಂಪು ಸೂಸ-

ಲಲ್ಲಲ್ಲಿ ಕರಣ ಚಾಚೇವು

ನಡು ನಾಡೆ ಇರಲಿ, ಗಡಿನಾಡೆ ಇರಲಿ

ಕನ್ನಡದ ಕಳೆಯ ಕೆಚ್ಚೇವು

ಮರತೇವು ಮರವ, ತೆರೆದೇವು ಮನವ,

ಎರೆದೇವು ಒಲವ-ಹಿರಿ ನೆನಪ

ನರನರವನೆಲ್ಲ ಹುರಿಗೊಳಿಸಿ ಹೊಸೆದು

ಹಚ್ಚೇವು ಕನ್ನಡದ ದೀಪ

ಕಲ್ಪನೆಯ ಕಣ್ಣು ಹರಿವನಕ ಸಾಲು

ದೀಪಗಳ ಬೆಳಕ ಬೀರೇವು

ಹಚ್ಚಿರುವ ದೀಪದಲಿ ತಾಯ ರೂಪ

ಅಚ್ಚಳಿಯದಂತೆ ತೋರೇವು

ಒಡಲೊಡಲ ಕೆಚ್ಚಿನಾ ಕಿಡಿಗಳನ್ನು

ಗಡಿನಾಡಾಚೆ ತೂರೇವು

ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ?

-ನಾಡೊಲವೆ ನೀತಿ ಹಿಡಿ ನೆನಪ

ಮನೆಮನೆಗಳಲ್ಲಿ ಮನಮನಗಳಲ್ಲಿ

ಹಚ್ಚೇವು ಕನ್ನಡದ ದೀಪ.

ಕರುನಾಡಿನರಿವ ನೆರೆತೀವಿ ಭಾವ-

ದಲಿ ಜೀವನಾಡಿ ನುಡಿಸೇವು

ತೆರೆತೆರೆದ ಕಣ್ಣಿನಲಿ ನೇಹವೆರೆದು

ನವ ಜ್ಯೋತಿಯನ್ನೆ ಮುಡಿಸೇವು

ನಮ್ಮನ್ನವುಂಡು ಅನ್ಯಾಯಗೈಯು

ವಂಥವರ ಹುಚ್ಚ ಬಿಡಿಸೇವು

ಇಹುದೆಮಗೆ ಛಲವು,

ಕನ್ನಡರ ಬಲವು ಕನ್ನಡದ ಒಲವು -ಹಿಡಿನೆನವು

ನಮ್ಮದೆಯ ಕೆಚ್ಚುನೆಚ್ಚುಗಳನೂಡಿ

ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದಾ ಹೆಸರ ಉಳಿಸ-

ಲೆಲ್ಲಾರು ಒಂದುಗೂಡೇವು

ನಮ್ಮದೆಯ ಮಿಡಿಯುವೀ ಮಾತಿನಲ್ಲಿ

ಮಾತೆಯನು ಪೂಜೆ ಮಾಡೇವು

ನಮ್ಮುಸಿರು ತೀಡುವೀ ನಾಡಿನಲ್ಲಿ

ಮಾಂಗಲ್ಯಗೀತ ಹಾಡೇವು

ತೊರೆದೇವು ಮರುಳ, ಕಡೆದೇವು ಇರುಳ

ಪಡೆದೇವು ತಿರುಳ -ಹಿಡಿನೆನಪ

ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ

ಹಚ್ಚೇವು ಕನ್ನಡದ ದೀಪ.

ಸಾಹಿತ್ಯ: ಡಾ. ಡಿ.ಎಸ್. ಕರ್ಕಿ



Discussion

No Comment Found